ಏನು ಹೇಳಲಿ ನಮ್ಮ ಶಿವರಾತ್ರಿ ಜಾಗರಣೆಯ
ಪಿಶಾಚಿಗಳಂತೆ ರಾತ್ರಿ ಎಲ್ಲವ ಕಳೆದು,
ಬೀದಿ ಬೀದಿಯ ಸುತ್ತಿ
ಬೊಗಳುತಿಹ ನಾಯಿಗಳ ಮುಂದೆ,
ನಗರ ಕಾಯುತಿಹ ಪೊಲೀಸರ ಹಿಂದೆ,
ಅಲೆದಲೆದು
ಶಿವನ ಗುಡಿಯ ಮುಂದೆ,
ದಾಸರ ಶಿವಕಥೆಯ ಚಪ್ಪರದಲ್ಲಿ
ಕ್ಷಣ ಹೊತ್ತು ನಿಂತು,
ನಡುರಾತ್ರಿಯಲ್ಲಿ
ಯಾವುದೋ ದರಿದ್ರ ಚಿತ್ರವ ನೋಡಿ,
ಕಂಡ ಹೋಟೆಲಿಗೆ ನುಗ್ಗಿ
ಕೇಳಿದ ಹಣವ ತೆತ್ತು
ತಣ್ಣನೆಯ ಕಹಿ ಕಾಫಿಯ ಕುಡಿದು
ಕಂಡ ಕಂಡ ಬೀದಿಗಳಲ್ಲಿ
ಗೊತ್ತುಗುರಿ ಇಲ್ಲದೆ ನಡೆದು,
ಕಾಸೆಲ್ಲಾ ಖರ್ಚಾಗಿ,
ತನುವೆಲ್ಲಾ ಸುಸ್ತಾಗಿ,
ಹರ ಹರ ಎನ್ನುತ್ತಾ ಮನೆ ಸೇರಿದಾಗ
ಕೊನೆಗೂ ದೊರೆಯಿತು ಕೈಲಾಸ ಮೋಕ್ಷ,
ಅಪ್ಪನ ಕೋಪದ ಕಪಾಳ ಮೋಕ್ಷ.
*****
೧೧-೦೩-೧೯೭೬
Related Post
ಸಣ್ಣ ಕತೆ
-
ಸ್ವಯಂಪ್ರಕಾಶ
ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…
-
ತ್ರಿಪಾದ
ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…
-
ಇಬ್ಬರು ಹುಚ್ಚರು
ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…
-
ಗಿಣಿಯ ಸಾಕ್ಷಿ
ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…
-
ಕತೆಗಾಗಿ ಜತೆ
ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…